ಮಳೆಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳಿವು

3 Min Read

ದಾವಣಗೆರೆ : (ಆ.ವಿ) ಮೇ.27  : ಈಗಾಗಲೇ ಪೂರ್ವ ಮುಂಗಾರು ಮಳೆ ಚಾಲ್ತಿಯಲ್ಲಿದೆ. ಮಳೆಯ ಪ್ರಭಾವ ಹೇಗಿದೆ ಎಂದು ಬೆಂಗಳೂರು ನಮಗೆ ತೋರಿಸುತ್ತಿದೆ. ಇಡೀ ಪ್ರದೇಶವೇ ಜಲಮಯವಾಗಿ ಉಸಿರಾಟದ ಸಮಸ್ಯೆ ಗಳನ್ನು, ಕೆಮ್ಮು, ನೆಗಡಿ, ಜ್ವರ ಹಾಗೂ ಇನ್ನಿತರ ತೊಂದರೆಗಳನ್ನು ತರುತ್ತಿದೆ. ಬದಲಾಗುತ್ತಿರುವ ತಾಪಮಾನ ಜನರಲ್ಲಿ ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕಿ ರೋಗ ನಿರೋಧಕ ಶಕ್ತಿಯ ಕೊರತೆ ಎದುರಾಗುವಂತೆ ಕೂಡ ಮಾಡುತ್ತಿದೆ.

ಪ್ರಸ್ತುತ ನಾವು ಈ ಲೇಖನದಲ್ಲಿ ಅತಿಯಾದ ಮಳೆ ಮತ್ತು ಈ ಸಂದರ್ಭದಲ್ಲಿ ಎದುರಾಗುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧ ಮತ್ತು ಇಂತಹ ಸಂದರ್ಭಗಳಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಅನಾವರಣಗೊಳಿಸಿದ್ದೇವೆ.
ಇದೊಂದು ವೈರಲ್ ಸೋಂಕು ಆಗಿದ್ದು, ಮೂಗು ಮತ್ತು ಗಂಟಲಿನ ಭಾಗಕ್ಕೆ ಹೆಚ್ಚು ಪ್ರಭಾವ ಬೀರುತ್ತದೆ. ಈ ಸಂದರ್ಭದಲ್ಲಿ ಮೂಗು ಸುರಿಯುವುದು, ಸೀನುವುದು, ಕೆಮ್ಮು, ಗಂಟಲು ನೋವು ಮತ್ತು ಸಣ್ಣದಾಗಿ ಜ್ವರ ಕಾಣಿಸಿಕೊಳ್ಳಬಹುದು. ನಿರಂತರವಾಗಿ ಶೀತದ ಗಾಳಿ ಮತ್ತು ತೇವಾಂಶದ ವಾತಾವರಣ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಇದು ಕುಸಿಯುವಂತೆ ಮಾಡುತ್ತದೆ ಮತ್ತು ವೈರಲ್ ಸೋಂಕು ಉಂಟು ಮಾಡುತ್ತದೆ. ಈ ಸಮಯದಲ್ಲಿ ಬಿಸಿ ಬಿಸಿಯಾಗಿ ತುಳಸಿ ಕಷಾಯ, ಪುದೀನಾ ಚಹಾ, ಬಿಸಿ ಬಿಸಿಯಾಗಿರುವ ತರಕಾರಿ ಸೂಪ್ ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಿದರೆ ಒಳ್ಳೆಯದು.
ಸಾಮಾನ್ಯ ಶೀತ ಕಂಡುಬರುವಂತೆ, ಜ್ವರ ಕೂಡ ಈ ಸಂದರ್ಭದಲ್ಲಿ ಕಾಣಿಸ ಲಿದ್ದು, ದೇಹದ ತಾಪಮಾನ ಹೆಚ್ಚಾಗಿರುತ್ತದೆ, ಮೈಕೈ ನೋವು, ಅತಿಯಾದ ಸುಸ್ತು ಮತ್ತು ನಿರಂತರವಾದ ಕೆಮ್ಮು ಕಾಣಿಸಿಕೊಳ್ಳುತ್ತದೆ.
ಮಳೆಗಾಲದಲ್ಲಿ ಜ್ವರ ಹೆಚ್ಚು ಕಾಣಿಸಲಿದ್ದು, ಜನರು ಮನೆಯಲ್ಲಿಯೇ ಇರುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಕೂಡ ಇರುತ್ತದೆ.  ಈ ಸಮಯದಲ್ಲಿ ಕಂಡು ಬರುವ ಮತ್ತೊಂದು ಸಮಸ್ಯೆ ಎಂದರೆ ಅದು ವೈರಲ್ ಜ್ವರ. ಅತಿಯಾದ ದೇಹದ ತಾಪಮಾನ, ತಲೆನೋವು, ಸುಸ್ತು ಮತ್ತು ಮೈ ಕೈ ನೋವು ಇದರ ಲಕ್ಷಣಗಳು. ಬೇರೆ ಬೇರೆ ತರಹದ ವೈರಸ್ ಪ್ರಭೇದ ಗಳ ಕಾರಣದಿಂದ ಜ್ವರ ಉಂಟಾಗಲಿದ್ದು, ತೇವಾಂಶದ ವಾತಾವರಣದಲ್ಲಿ ಬಹಳ ಬೇಗನೆ ಇದು ಹರಡುತ್ತದೆ. ಅಲರ್ಜಿ ಮಳೆಗಾಲದಲ್ಲಿ ಈ ಸಮಸ್ಯೆ ಕೂಡ ಹಲವರನ್ನು ಕಾಡುತ್ತದೆ.
ಅಲರ್ಜಿ ಉಂಟಾದರೆ ಸೀನುವುದು, ಕಣ್ಣುಗಳ ಕೆರೆತ, ಮೂಗು ಸುರಿಯುವುದು ಮತ್ತು ಕೆಮ್ಮು ಕಂಡುಬರುತ್ತದೆ.
ಅಸ್ತಮಾ ಸಮಸ್ಯೆಯನ್ನು ಸಮರ್ಪಕವಾಗಿ ನಿಯಂತ್ರಿಸಬೇಕು ಅಂದರೆ ಅತ್ಯುತ್ತಮ ಜೀವನಶೈಲಿಯನ್ನು ಅನುಸರಿಸಿದರೆ ಒಳ್ಳೆಯದು. ಆಸ್ತಮಾ ವನ್ನು ಸಮರ್ಪಕವಾಗಿ ನಿಯಂತ್ರಿಸದಿದ್ದರೆ ಅದು ಜೀವಕ್ಕೆ ಅಪಾಯ! ಹೀಗಾಗಿ ಈ ಸಮಯದಲ್ಲಿ ಆರೋಗ್ಯಕಾರಿ ಆಹಾರ ಪದ್ಧತಿಯ ಜೊತೆಗೆ ಕೆಟ್ಟ ಜೀವನಶೈಲಿಯಿಂದ ದೂರವಿರಿ.
ಹೆಚ್ಚಾಗಿ ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ ಹಾಗೂ ಆದಷ್ಟು ವಿಟಮಿನ್ ಸಿ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ.
ಮಳೆಗಾಲದಲ್ಲಿ ಸಂಪೂರ್ಣವಾಗಿ ನಾವು ಮನೆಯಿಂದ ಆಚೆ ಬರದಿರಲು ಆಗುವುದಿಲ್ಲ. ಮನೆಯಲ್ಲಿರುವ ಮತ್ತು ಮನೆಯಿಂದ ಹೊರಗೆ ಹೋಗ ಬೇಕಾದ ಸಂದರ್ಭದಲ್ಲಿ ಕೆಲವೊಂದು ಟಿಪ್ಸ್ ಅನುಸರಿಸುವುದು ಒಳ್ಳೆಯದು.
ಒಣ ಬಟ್ಟೆ ಧರಿಸಿ, ಈಗಾಗಲೇ ನೀರಿನಲ್ಲಿ ನೆನೆದಿರುವ ಬಟ್ಟೆಗಳು ಅಥವಾ ವಸ್ತುಗಳು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತವೆ. ಮನೆಯಿಂದ ಹೊರಗೆ ಹೋಗುವಾಗ ಛತ್ರಿ ಅಥವಾ ರೈನ್ ಕೋಟ್ ಬಳಸಿ.
ಉಸಿರಾಟದ ಸೋಂಕುಗಳು ಬರದಿರಲಿ ಆದಷ್ಟು ಬೇಗ ನೆನೆದಿರುವ ಬಟ್ಟೆಗಳನ್ನು ಬದಲಾಯಿಸಿ,
ಆಗಾಗ ನಿಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದು ಕೊಳ್ಳಿ. ಕೈ ತೊಳೆಯದೆ ನಿಮ್ಮ ಮುಖ, ಮೂಗು, ಕಣ್ಣು, ಬಾಯಿ ಮುಟ್ಟಿಕೊಳ್ಳಬೇಡಿ.
ಇದರಿಂದ ವೈರಸ್ ಗಳು ಮತ್ತು ಬ್ಯಾಕ್ಟೀರಿ ಯಾಗಳು ನಿಮ್ಮ ದೇಹ ಪ್ರವೇಶಿ ಸುವ ಸಾಧ್ಯತೆ ಇರುತ್ತದೆ.
ಸೊಳ್ಳೆ ಪರದೆ ಬಳಸಿ: ಮನೆಯಲ್ಲಿ ಇರುವಂತಹ ಸಂದರ್ಭದಲ್ಲಿ ಸೊಳ್ಳೆ ಪರದೆ ಬಳಸುವ ಅಭ್ಯಾಸ ಮಾಡಿಕೊಳ್ಳಿ. ಮೈಕೈ ಮುಚ್ಚಿ ಕೊಳ್ಳುವಂತೆ ಬಟ್ಟೆ ಹಾಕಿಕೊಳ್ಳಿ. ಕೀಟನಾಶಕಗಳನ್ನು ಬಳಸಿ. ಮನೆ ಸುತ್ತಮುತ್ತ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಿ. ಇದರಿಂದ ನಿಂತ ನೀರಲ್ಲಿ ಸೊಳ್ಳೆಗಳು ಮೊಟ್ಟೆ ಇಡದಂತೆ ಕಾಪಾಡಿ ಕೊಳ್ಳುತ್ತೀರಿ.

Share this Article
Leave a comment

Leave a Reply

Your email address will not be published. Required fields are marked *