ಡೆಂಗಿ ರೋಗಿಗಳ ಆರೈಕೆಗಾಗಿ ವಿಶೇಷ ವಾರ್ಡ್: 

ಡೆಂಗಿ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವಾರ್ಡಗೆ ಅವಕಾಶ ಕಲ್ಪಿಸಲಾಗಿದೆ 

 

ದಾವಣಗೆರೆ. ಏ. 29.(ಆ. ವಿ)ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಡೆಂಗಿ ರೋಗಿಗಳ ಆರೈಕೆ ಹಾಗೂ ಚಿಕಿತ್ಸೆಗಾಗಿ 10 ಬೆಡ್ ಗಳ ವಿಶೇಷ ವಾರ್ಡ್ ತೆರೆಯಲಾಗಿದೆ.

 

ಡೆಂಗಿ ಜ್ವರಕ್ಕೆ ಲಸಿಕೆ ಇಲ್ಲ. ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚು ರಕ್ತಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಡೆಂಗಿ ರೋಗಿಗಳು ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುವ ಪ್ರಮಾಣ ಕಡಿಮೆ ಇದೆ. ಶೇ 95 ರಷ್ಟು ರೋಗಿಗಳು ಚಿಕಿತ್ಸೆ ಪಡೆದು ಶೀಘ್ರವೇ ಗುಣಮುಖರಾಗುತ್ತಾರೆ.

ಮಕ್ಕಳ ಆರೈಕೆಗೆ ವಿಶೇಷ ಕಾಳಜಿ ಅಗತ್ಯ

ಕಳೆದ ವರ್ಷ ರಾಜ್ಯದಲ್ಲಿ 18 ವರ್ಷದೊಳಗಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗಿಯಿಂದ ಮೃತಪಟ್ಟಿದ್ದರು. ಈ ಬಾರಿಯೂ ರಾಜ್ಯದಲ್ಲಿ ಒಟ್ಟು 1,137 ಪ್ರಕರಣಗಳ ಪೈಕಿ 537 ಸೋಂಕಿತರು 18 ವರ್ಷದೊಳಗಿನವರಾಗಿದ್ದಾರೆ. ಹೀಗಾಗಿ ಡೆಂಗಿಯಿಂದ ಮಕ್ಕಳನ್ನು ರಕ್ಷಿಸಲು ವಿಶೇಷ ಕಾಳಜಿಯ ಅಗತ್ಯವಿದೆ.

ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಹಂತದ ವಿದ್ಯಾರ್ಥಿ, ವಿದ್ಯಾ, ರ್ಥಿನಿಯರ ಪೈಕಿ ಹೆಚ್ಚಿನವರು ಚಡ್ಡಿ ಹಾಗೂ ಸ್ಕರ್ಟ್‍ಗಳನ್ನು ಧರಿಸಿ ಶಾಲೆಗೆ ಹೋಗುತ್ತಾರೆ.

ಹಗಲಿನಲ್ಲಿ ಸಕ್ರಿಯವಾಗುವ ಏಡಿಸ್ ಈಜಿಪ್ಟ್ ಸೊಳ್ಳೆಗಳು ಕಚ್ಚುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲ ಮಕ್ಕಳಲ್ಲಿ ಡೆಂಗಿ ಲಕ್ಷಣಗಳು ಸುಪ್ತ. ವಾಗಿರುತ್ತವೆ. ಎμÉ್ಟೀ ಪರೀಕ್ಷೆ ನಡೆಸಿದರೂ, ಅವು ಪತ್ತೆಯಾಗುವುದೇ ಇಲ್ಲ. ಹೀಗಾಗಿ ಜ್ವರ ಕಾಣಿಸಿಕೊಂಡಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಮಕ್ಕಳಲ್ಲಿ ವೈರಾಣುಗಳಿಗೆ ಪ್ರತಿರೋಧ ಒಡ್ಡುವ ಶಕ್ತಿ ಕಡಿಮೆ ಇರುತ್ತದೆ. ಡೆಂಗಿ ವೈರಾಣುಗಳು ಕೂಡ ರೂಪಾಂತರಗೊಳ್ಳುವ ಸಾಧ್ಯತೆ ಇರುತ್ತದೆ.

ಸಾಮಾನ್ಯ ಜ್ವರವೆಂದು ಭಾವಿಸಿ ನಿರ್ಲಕ್ಷ್ಯ ತೋರಿದರೆ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು’ ಎಂದು ಮಕ್ಕಳ ತಜ್ಞರು ಎಚ್ಚರಿಸಿದರು.

ಮಕ್ಕಳು ಪ್ರತಿದಿನ ಸ್ನಾನ ಮಾಡಿದ ಬಳಿಕ ಕೊಬ್ಬರಿ ಎಣ್ಣೆ ಹಾಗೂ ಬೇವಿನ ಎಣ್ಣೆಯನ್ನು 4:1ರ ಅನುಪಾತದಲ್ಲಿ ಕೈ, ಕಾಲುಗಳಿಗೆ ಹಚ್ಚಿಕೊಳ್ಳಬೇಕು. ಸೊಳ್ಳೆ ಕಡಿತದಿಂದ ಪಾರಾಗಲು ಇದೂ ಕೂಡ ಒಂದು ಮಾರ್ಗೋಪಾಯ ಎನ್ನುತ್ತಾರೆ.

ಡೆಂಗಿ ನಿಯಂತ್ರಣದ ಕ್ರಮಗಳು

 

1.ಮನೆಯಲ್ಲಿನ ತೊಟ್ಟಿ, ಬ್ಯಾರೆಲ್, ಡ್ರಮ್ ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡುವುದು, ಸ್ವಚ್ಛಗೊ. ಳಿಸಿದ ಬಳಿಕ ಪುನಃ ನೀರು ತುಂಬಿಸುವುದು.

2. ತೊಟ್ಟಿ, ಬ್ಯಾರೆಲ್, ಡ್ರಮ್‍ಗಳನ್ನು ಸದಾ ಕಾಲ ಮುಚ್ಚಿಡುವುದು.

3.ಮನೆಯ ಸುತ್ತಮುತ್ತ ಬಿಸಾಡಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು.

4.ಸರ್ಕಾರಿ/ಖಾಸಗಿ ಕಚೇರಿ ಹಾಗೂ ಸಂಸ್ಥೆಗಳ ಒಳಾಂಗಣ ಹಾಗೂ ಹೊರಾಂಗಣಗ-ಳಲ್ಲಿ ಈಡೀಸ್ ಈಜಿಪ್ಟ್ ಸೊಳ್ಳೆಗಳು ಉತ್ಪತ್ತಿಯಾಗ-ದಂತೆ ತಡೆಯಲು ಅಗತ್ಯ ಕ್ರಮ ವಹಿಸುವುದು.

5.ಈಡೀಸ್ ಈಜಿಪ್ಟ್, ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲಿನ ವೇಳೆ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಗಳನ್ನು ಬಳಸುವುದು.

6.ಸೊಳ್ಳೆ ನಿರೋಧಕ ಕ್ರೀಮ್, ಲೋಷನ್‍ಗಳನ್ನು ಬಳಸುವುದು. ಸೊಳ್ಳೆಯಿಂದ ರಕ್ಷಿಸಿಕೊಳ್ಳಲು ಮೈತುಂಬಾ ಬಟ್ಟೆ ಧರಿಸುವುದು.

7.ಸಂಜೆ ವೇಳೆ ಸೊಳ್ಳೆ ಬಾರದಂತೆ ತಡೆಯಲು ಮನೆ ಹಾಗೂ ಕಿಟಕಿ ಬಾಗಿಲುಗಳನ್ನು ಮುಚ್ಚುವುದು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಎನ್.ಬಿ.ನಾಗೇಂದ್ರಪ್ಪ 

    ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗಿ ರೋಗಿಗಳ ಆರೈಕೆಗೆ  ವಿಶೇಷ ವಾರ್ಡ್ ತೆರೆದಿರುವುದು ಸೇರಿದಂತೆ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಕ್ತಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದರು.

ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಕೆ.ಎಚ್.ಗಂಗಾಧರ್ ಮಾಹಿತಿಯನ್ನು ಹಂಚಿಕೊಂಡರು.

ಈಗಾಗಲೇ ಮಳೆ ಶುರುವಾಗಿರುವುದರಿಂದ ಈ ಬಾರಿಯೂ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು.

ಡೆಂಗಿ ಜ್ವರ ನಿಯಂತ್ರಣಕ್ಕಾಗಿ ಸಹಾಯವಾಣಿಯನ್ನು 18004258330 ಸಂಖ್ಯೆಗೆ ಸಂಪರ್ಕಿಸಬಹುದು.

 

 

Share this Article
Leave a comment

Leave a Reply

Your email address will not be published. Required fields are marked *