“ಪ್ರೀತಿ ಆರೈಕೆ ಟ್ರಸ್ಟ್ ದಾವಣಗೆರೆ”ವತಿಯಿಂದ ಉಚಿತ ಆರೋಗ್ಯ ಶಿಬಿರ

1 Min Read

ದಾವಣಗೆರೆ : ( ಆ.ವಿ)ಮೇ 29 : ಆರೈಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ,ಪ್ರೀತಿ ಆರೈಕೆ ಟ್ರಸ್ಟ್ ದಾವಣಗೆರೆ ಇವರ ವತಿಯಿಂದ ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮುಸ್ಟೂರು ಜಗಳೂರು ತಾಲೂಕು ಇವರ ಅಧ್ಯಕ್ಷತೆಯಲ್ಲಿ ,ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮುಸ್ಟೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು

ಶಿಬಿರದಲ್ಲಿ ಆಸ್ಪತ್ರೆಯಲಿ ನೀಡುವ ಅತ್ಯುತ್ತಮ
ಚಿಕಿತ್ಸೆಗಳಾದ ಹೃದಯ ರೋಗ ನರರೋಗ ಮೂತ್ರಪಿಂಡ ಕೀಲು ಮೂಳೆ ಚರ್ಮರೋಗ ಬಿಪಿ ಶುಗರ್ ಇಸಿ ಮತ್ತು ಎಕೋ ಸ್ಕ್ಯಾನಿಂಗ್ ಉಚಿತ ತಪಾಸಣೆಯನ್ನು ನೆರವೇರಿಸಿದರು

*ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಟಿ ಜಿ ರವಿಕುಮಾರ್* ಅವರು ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಚಿಕಿತ್ಸೆಯ ಸೌಲಭ್ಯಗಳು ಹೆಚ್ಚಾಗಿ ಇರುವುದಿಲ್ಲ ಹಾಗೂ ರೋಗಿಗಳು ಆಸ್ಪತ್ರೆಯ ಖರ್ಚುಗಳನ್ನು ಗ್ರಹಿಸಲಾಗಲಿಲ್ಲದ ಕಾರಣಕ್ಕೆ ಆರೋಗ್ಯ ಸಮಸ್ಯೆಗಳನ್ನು ತಮ್ಮಲ್ಲಿಯೇ ಬಿಟ್ಟುಕೊಳ್ಳುವುದು ಸಾಮಾನ್ಯವಾಗಿ ನೋಡುತ್ತಿದ್ದೇವೆ ಆದ ಕಾರಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಿಗುವ ಆರೋಗ್ಯ ಸೌಲಭ್ಯಗಳನ್ನು ಪ್ರೀತಿಯ ಆರೈಕೆ ಟ್ರಸ್ಟ್ ಮುಖಾಂತರ ತಮ್ಮ ಗ್ರಾಮಗಳಿಗೆ ಬಂದು ಒದಗಿಸಿ ಎಲ್ಲರಿಗೂ ಎಲ್ಲರೂ ಆರೋಗ್ಯವಂತರಾಗಿ ಇರಬೇಕೆಂಬ ಅಭಿಲಾಷೆ ಇದೆ ಎಂದು ತಿಳಿಸಿ ತಮ್ಮ ಪತ್ನಿ ದಿವಂಗತ *ಶ್ರೀಮತಿ ಪ್ರೀತಿ ರವಿಕುಮಾರ್* ಅವರಿಗೆ ಇದ್ದ ಆಸೆಯಂತೆ ಆರೋಗ್ಯವಾದ ಸಮಾಜವನ್ನು ಪ್ರತಿ ಗ್ರಾಮದಲ್ಲಿ ನಿರ್ಮಾಣ ಮಾಡಬೇಕು ಎಂದರು .

Share this Article
Leave a comment

Leave a Reply

Your email address will not be published. Required fields are marked *