“ಎಸ್ .ಎಸ್.ಕೇರ್ . ಟ್ರಸ್ಟ್ ವತಿಯಿಂದ ಪ್ರಥಮ ಚಿಕಿತ್ಸಾ ಕ್ರಮಗಳ ತರಬೇತಿ ಶಿಬಿರ.

1 Min Read

ದಾವಣಗೆರೆ : ( ಆ.ವಿ) :*ಮಿಸ್ಟರ್ & ಮಿಸ್ ದಾವಣಗೆರೆ ಮಾಡಲ್ ಗಳಿಗೆ ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ತುರ್ತು ಪರಿಸ್ಥಿತಿ ಹಾಗೂ ಪ್ರಥಮ ಚಿಕಿತ್ಸಾ ಕ್ರಮಗಳ ತರಬೇತಿ.*

ದಾವಣಗೆರೆಯ ಪ್ರತಿಷ್ಠಿತ ಇವೆಂಟ್ ಕಂಪೆನಿ ಖುಷಿ ಇವೆಂಟ್ ವತಿಯಿಂದ ನಡೆಸುವ ಮಿಸ್ಟರ್ & ಮಿಸ್ ದಾವಣಗೆರೆ ಸ್ಪರ್ಧೆಯ 5 ನೇ ಸಂಚಿಕೆಗೆ ಆಯ್ಕೆಯಾಗಿರುವ ಸ್ಪರ್ಧಿಗಳಿಗೆ ಈಗಾಗಲೇ ಮಾಡೆಲಿಂಗ್ ತರಬೇತಿ ಶುರುವಾಗಿದೆ , ಮಾಡೆಲ್ ಗಳು ಮಾಡೆಲಿಂಗ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿ ಇರಬೇಕಾಗಿರುವುದು ಅತ್ಯಗತ್ಯ ಎಂಬ ಅಭಿಪ್ರಾಯದೊಂದಿಗೆ ಯುವ ನಾಯಕ ಶಿವರತನ್ ರವರ ನೇತೃತ್ವದಲ್ಲಿ , ‘ಎಸ್. ಎಸ್. ಕೇರ್ ಟ್ರಸ್ಟ್’ ನ ಸಹಯೋಗದಲ್ಲಿ ತುರ್ತು ಪರಿಸ್ಥಿತಿ ಹಾಗೂ ಪ್ರಥಮ ಚಿಕಿತ್ಸಾ ಕ್ರಮಗಳ ತರಬೇತಿ ಶಿಬಿರ ನಗರದ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ ಎಸ್. ಎಸ್. ಕೇರ್ ಟ್ರಸ್ಟ್ ನ ಡಾಕ್ಟರ್ ಅಬ್ದುಲ್ ಶಬ್ಬಿರ್ ರವರು ಮೂಲಭೂತ ಜೀವ ಬೆಂಬಲ (basic life support) ಹಾಗೂ ಡಾಕ್ಟರ್ ಮಂಜುನಾಥ್ ರವರು ಪ್ರಥಮ ಚಿಕಿತ್ಸಾ ಕ್ರಮಗಳನ್ನು ಅಂದರೆ ಹೃದಯಾಘಾತ, ರಸ್ತೆ ಅಪಘಾತ, ಹಾವು – ಚೇಳು ಕಡಿತ , ಸ್ಟ್ರೋಕ್ , ಮಧುಮೇಹ ಏರಿಳಿತ ಹಾಗೂ ಇನ್ನಿತರ ಸಾಮಾನ್ಯವಾಗಿ ಬಂದೊದಗುವ ಅನೇಕ ಅನಾರೋಗ್ಯದ ತೊಂದರೆಗಳಿಗೆ ತುರ್ತಾಗಿ ವಹಿಸಬೇಕಾಗುವಾ ಕ್ರಮಗಳ ತರಬೇತಿಯನ್ನು ನೀಡಿದರು , ಮಿಸ್ಟರ್ & ಮಿಸ್ ದಾವಣಗೆರೆ ಸ್ಪರ್ಧೆಯ ಸ್ಪರ್ಧಿಗಳು ಹಾಗೂ ಶಿವರತನ್ ಯುವ ಬಳಗದ ಪದಾಧಿಕಾರಿಗಳು ತರಬೇತಿ ಪಡೆದರು.

ಖುಷಿ ಇವೆಂಟ್ ಮುಖ್ಯಸ್ಥ ಮಯೂರ್.ಎಂ , ಸುಹೇಲ್ , ಸಂತೋಷ್, ತಾಹಿರ್ , ಗಣೇಶ್ , ಈಶ್ವರ್, ಗಿರಿ ಪ್ರಸಾದ್, ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Share this Article
Leave a comment

Leave a Reply

Your email address will not be published. Required fields are marked *